Saturday, September 7, 2013

ಹೊಳಲ್ಕೆರೆ ಬಯಲು ಗಣಪತಿ- Holalkere Ganesha_ Malathesh Urs Harthimath


      ಏಕ ಶಿಲಾ :ಹೊಳಲ್ಕೆರೆ ಬಯಲು ಗಣಪತಿ.


*ಇದು ಜಡೆ ಗಣಪ, ಮಳೆ ಗಣಪ.
* ಪಾಳೇಗಾರರಿಂದ 1475ರಲ್ಲಿ ಪ್ರತಿಷ್ಠಾಪಿತ
* ಕುಜ ದೋಷ ನಿವಾರಕ

- ಮಾಲತೇಶ್ ಅರಸ್‌ಹರ್ತಿಮಠ 
ಬೆಂಗಳೂರು:  ಗಣಪನಿಗೆ ಜಡೆ ಇದೆ ಅಂದ್ರೆ ನಂಬ್ತೀರಾ. ಹೌದು. ಇವನು ಜಡೆ ಗಣಪ, ಮಳೆ ಗಣಪ, ಬಯಲು ಗಣಪ, ಕುಜದೋಷ ನಿವಾರಕ ಗಣಪ, ಐದು ನೂರು ವರ್ಷಗಳ ಇತಿಹಾಸದ ಗಣಪ. ರಾಜ್ಯದ ಬೃಹತ್ ಏಕ ಶಿಲಾ ಗಣಪ.
ಹೀಗೆ   ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿರುವ ಬಯಲು ಗಣಪತಿ ಬಹಳಷ್ಟು ವಿಶೇಷತೆ ಹೊಂದಿದೆ. 1475ಲ್ಲಿ ಪ್ರತಿಷ್ಠಾಪನೆಯಾಗಿರುವ ಇದು ರಾಜ್ಯದ ಬಹತ್ ಹಾಗೂ ಏಕ ಶಿಲಾ ಗಣಪ.
 ಚಿತ್ರದುರ್ಗದ ಪಾಳೇಗಾರ ಕಾಮಗೇತಿ ವಂಶದ ಮದಕರಿ ನಾಯಕನ ಮೈದುನ ಗುತ್ಯಪ್ಪ ನಾಯಕರಿಂದ 1475ರಲ್ಲಿ  ಸ್ಥಾಪಿತವಾಗಿದೆ. ಇದಕ್ಕೆ ಸುಮಾರು 500 ವರ್ಷದ ಇತಿಹಾಸವಿದ್ದು ಹದಿನಾಲ್ಕುವರೆ ಅಡಿ ಎತ್ತರವಿದೆ. ಬಯಲಿನಲ್ಲಿದ್ದರಿಂದ ಇದಕ್ಕೆ ಬಯಲು ಗಣಪತಿ ಎಂದು ಕರೆಯಲಾಗುತ್ತಿದೆ. ವಿಶೇಷವಾಗಿ ಇದಕ್ಕೆ ಜಡೆ ಇರುವುದರಿಂದ ಜಡೆ ಗಣೇಶ ಎನ್ನುತ್ತಾರೆ. ಮಳೆ ಬಾರದಿದ್ದಾಗ ಇಲ್ಲಿ  101 ಕೊಡ ನೀರು ಅಭಿಷೇಕ ಮಾಡಿದ್ರೆ ಮಳೆ ಬರುತ್ತದೆ. ಹಾಗಾಗಿ ಇದನ್ನು ಮಳೆಗಣಪ ಎಂದು ಕರೆಯುತ್ತಾರೆ ಎನ್ನುತ್ತಾರೆ.
 ಈ ಜಡೆ ಗಣೇಶನಿಗೆ  ರಾಜ್ಯದ ವಿವಿಧ ಭಾಗಗಳಿಂದ  ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನಕ್ಕೆ ಯಾವಾತ್ತೂ ಬೀಗ ಹಾಕಿಲ್ಲ. ಇಲ್ಲಿ ಯಾವುದೇ ಕಳ್ಳತನವೂ ಆಗಿಲ್ಲ. ಇದು ಈ ಪಾಂತ್ಯದ ಐತಿಹಾಸಿಕ ದೇಗುಲ. ಗಣಪ ರಾಜ ಮಹಾರಾಜರ ಆರಾಧ್ಯ ದೈವವಾಗಿದ್ದ ಎಂಬ ಐತಿಹ್ಯವಿದೆ.  ಇದಕ್ಕೆ ಬೆಣ್ಣೆ ಅಲಂಕಾರ, ಬೆಳ್ಳಿ ಅಲಂಕಾರ, ಕುಂಕುಮಾಲಂಕಾರ ಅಂದ್ರೆ ಅಚ್ಚು ಮೆಚ್ಚು. ಬೆಣ್ಣೆ ಅಲಂಕಾರ ಮಾಡಲು ಸುಮಾರು 80 ರಿಂರ 90 ಕೆಜಿ ಬೆಣ್ಣೆ ಬೇಕು.  ಸಂಕಷ್ಟಿ ದಿನ ಸುಮಾರು 5ರಿಂದ 6 ಸಾವಿರ ಭಕ್ತರು ಬಂದು ಗಣಪನ ದರ್ಶನ ಪಡೆಯುತ್ತಾರೆ.
 ಇಷ್ಠಾರ್ಥ  ಗಣಪ: 
 ಈ ಗಣೇಶ ಕೇವಲ ವಿಘ್ನ ನಿವಾರಕನಲ್ಲ, ಬದಲಿಗೆ ಇಷ್ಟಾರ್ಥ ನೆರವೇರಿಸುವವನು. ಮಕ್ಕ್ಕಳ ಭಾಗ್ಯ, ಉದ್ಯೋಗ್ಯ ಭಾಗ್ಯವನ್ನು ಕರುಣಿಸಿ ಯಾವುದೇ ತೊಂದರೆ ಇಲ್ಲದೆ ಭಕ್ತರನ್ನು ಸಂರಕ್ಷಿಸುತ್ತಾ ಬಂದಿದ್ದಾನೆ. ಜಡೆಯನ್ನು ಹೊಂದಿರುವ ಇವನನ್ನು ಕಂಡರೆ ಮಹಿಳೆಯರಿಗೆ ಇನ್ನಿಲ್ಲದ ಅಚ್ಚುಮೆಚ್ಚು. ಮಹಿಳೆಯರು ತಮ್ಮ ಹರಕೆ ತೀರಿಸಿಕೊಳ್ಳಲು ವಿಶೇಷವಾಗಿ ಬೆಣ್ಣೆಯನ್ನು ಈ ಜಡೆಗೆ ಹಚ್ಚುತ್ತಾರೆ.
ಕುಜ ದೋಷ ನಿವಾರಕ ಗಣಪ :
  ಈ ಗಣಪ ಪೂಜೆಯಿಂದಾಗಿ ಕುಜ ದೋಷ ಇನ್ನಿತರೆ ದೋಷ ನಿವಾರಣೆಯಾಗುತ್ತದೆ. ಮನುಷ್ಯನ ಜಾತಕದಲ್ಲಿರುವ ದೋಷಗಳನ್ನು ಪರಿಹರಿಸಲು ಮುಂದಾಗುವ ಗಣೇಶನ ಎಡ ಭಾಗದಲ್ಲಿ ನರಸಿಂಹ ಸ್ವಾಮಿ ಇದ್ದಾನೆ. ಇದರಿಂದ ಈ ಗಣಪನ್ನು ಆರಾಧಿಸಿದರೆ ಕುಜ ದೋಷ  ಪರಿಹಾರವಾಗುತ್ತದೆ. ಎಂಬ ನಂಬಿಕೆಯಿದೆ.
ಈ ಗಣೇಶನ ಜಡೆಗೆ ಪ್ರತಿ ಬಾರಿ ಬೆಣ್ಣೆಯನ್ನು ಹಚ್ಚಿ ಪೂಜಿಸಲಾಗುತ್ತದೆ. ಈ ಜಡೆ ಪಾರ್ವತಿಯ ತುರುಬು ಎನ್ನಲಾಗುತ್ತದೆ. ಹೀಗಾಗಿ ತಾಯಿಯ ತೊಡೆಯ ಮೇಲೆ ಕುಳಿತಂತೆ ಕಾಣುತ್ತದೆ ಈ ಗಣಪ ಇವನ ಕಪೆಗೆ ಪಾತ್ರರಾಗಲು ನಾಡಿನ ವಿವಿಧ ಕಡೆಗಳಿಂದ ಭಕ್ತರು ಬರುತ್ತಾರೆ.  ಹೀಗಾಗಿ ಇದು ಜಡೆ ಗಣಪನಾಗಿ ಮಳೆ ಗಣಪನಾಗಿದ್ದಾನೆ.













No comments:

Post a Comment