Tuesday, February 18, 2014

"ಮಠದೊಳಗೊಂದು ಮಹಾಮನೆ. ..." Malathesh Urs Harthikote_ Murugha math poem

ಮಠದೊಳಗೊಂದು ಮಹಾಮನೆ. 


ವೇದ ಘೋಷಗಳಿಲ್ಲ, ವಾದ್ಯ ಮೇಳವಿಲ್ಲ. 
ಅಕ್ಷತೆಯ ಹಾರೈಕೆ ಮೊದಲೇ ಇಲ್ಲ. 
ಅಮಾವಾಸ್ಯೆಯ ಭಯವಿಲ್ಲ, ರಾಹುಕಾಲದ ಕಾಟವಿಲ್ಲ. 
ಜಾತಿ ಭೇದಗಳಿಲ್ಲ, ಬಡವರಿಗೆ ಸಾಲದ ಹೊರೆ ಇಲ್ಲ, 
ಸಂತೃಪ್ತಿಯ ದಾಸೋಹ. ಶರಣರ ನೆರಳಲ್ಲಿ 
ಸರಳ ಮತ್ತು ವೈಚಾರಿಕತೆಯ ಹೊಂಬೆಳಕು. 

ಮದುವೆ ಎನ್ನುವುದೇ ಒಂದು ಸಂಭ್ರಮ
ಮುರುಘಾ ಮಠದಲ್ಲಿ ವೈಶಿಷ್ಟತೆಯ ಆಚರಣೆ 
ಸಾಮೂಹಿಕ ವಿವಾಹಗಳಿಗೆ ಎರಡು ದಶಕಗಳ ಸಂಭ್ರಮ. 
ಸರಳ ಮತ್ತು ವೈಚಾರಿಕತೆಯ ಲಕ್ಷಣ ಇಲ್ಲಿಯ ತಿರುಳು.
ಶರಣರು ಕ್ರಾಂತಿಕಾರಕ ಕಾರ್ಯಗಳ ಹರಿಕಾರರು
ಸಮಾನತೆಯ ಸಂಕೇತ ಬಿಂಬಿಸುವ ಸರದಾರರು.

ವೀರ ಮದಕರಿನಾಯಕ ನಾಳಿದ ನಾಡು
ಐತಿಹಾಸಿಕ ಏಳುಸುತ್ತಿನ ಕಲ್ಲಿನ ಕೋಟೆಯ ಬೀಡು 
ಓನಕೆ ಓಬವ್ವ ಬಾಳಿದ ಪುಣ್ಯ ಕ್ಷೇತ್ರ. 
ಮುರುಘಾ ಮಠ ಕೋಟೆ ನಗರಿಗೊಂದು ಚಿನ್ನದ ಕಿರೀಟ

ಮದುವೆ ಅಂದ್ರೆ ಬರಿ ಮಾತಲ್ಲ, ಅದು ಜೀವನದ ಹೆಜ್ಜೆ. 
ನಿತ್ಯ ಬದುಕು ಸಾಗಿಸುವ ಎರಡು ಹೃದಯಗಳ ಅಮೃತದ ಕಾಯಕ. 
ಬದುಕುವುದನ್ನು ಕಲಿಸುವ, ಜೀವನವ ತಿದ್ದುವ ಪಾಠಶಾಲೆ. 
ಪಂಚಾಗ, ಕಾಲ, ಗಳಿಗೆ, ಶಾಸ್ತ್ರದ ಹೊಂದಾಣಿಕೆ ಇಲ್ಲಿಲ್ಲ. 
ಅಂತಜರ್ಾತಿ, ವಿಧವಾ, ಅಂತರ್ ಧಮರ್ೀಯ ಪ್ರೇಮವಿವಾಹ
ಕಡು ಬಡವರ ಪಾಲಿಗೆ ಮಠವಲ್ಲ ಇದು ಮಹಾಮನೆ. 

ಬಡವರಿಗೆ ಇದು ಆಶ್ರಯ ಕೊಡುವ ತವರು ಮನೆ.
ಸಾಲ ಮಾಡಿಕೊಳ್ಳದೆ ದಾಂಪತ್ಯಕ್ಕೆ ಕಳಿಸುವ ಮಹಾಮನೆ
ಪ್ರೀತಿ ಸುಮಧುರ. ಪ್ರೀತಿ ಅಜರಾಮರ. ಪ್ರೀತಿ ಅಹ್ಲಾದಕರ 
ಪ್ರೀತಿಸುವ ಮನಗಳಿಗೆ ಮಠದಲ್ಲಿ ಸದಾ ಅವಕಾಶಗಳ ಪೂರ. 
ಪ್ರೇಮಿಗಳಿಗೆ ಇಲ್ಲಿ ಶರಣರೇ ಪೋಷಕರು. 
ವಿಧವೆಯರಿಗೆ ವಿವಾಹ ಭಾಗ್ಯ ನೀಡುವ ದೇವರು. 

ನೂತನ ವಧುವರರಿಗೆ ವಿಭೂತಿ ಧಾರಣೆ, ಕಂಕಣ ಧಾರಣೆ
ಸಮಾನತೆಗೆ ಹೆಣ್ಣಿನಿಂದ ಗಂಡಿಗೆ ರುದ್ರಾಕ್ಷಿ ಧಾರಣೆ. 
ಸತಿಪತಿಗಳು ಸಂಸಾರದಲ್ಲಿ ಸಂಯಮದಿಂದಿರಲು ಪ್ರತಿಜ್ಞಾವಿಧಿ 
ಅಕ್ಕಿಕಾಳಿನ ಅಕ್ಷತೆ ಬದಲಾಗಿ ಪುಷ್ಪವೃಷ್ಟಿ, 

ಅಮವಾಸ್ಯೆ ಕತ್ತಲೆಯ ಭೀತಿಯನ್ನು ಸೃಷ್ಠಿಸುವ ಭೀಕರ ದಿನ. 
ಶುಭ ಕಾರ್ಯಗಳನ್ನು ಮಾಡದಿರುವ ಕೆಟ್ಟ ಅನಿಷ್ಟ ದಿನ 
ಆದ್ರೆ ಶರಣರ ಪಾಲಿಗೆ ಅದು ಶ್ರೇಷ್ಟ ದಿನ.
ಮೌನದ ದಿನ, ಪ್ರಾಕೃತಿಕ ಸಂದೇಶ ಸಾರುವ ಅದೃಷ್ಟದ ದಿನ. 
ವಿಚಾರವಾದಿಗಳು, ಸಾಹಿತಿಗಳು, ಬುದ್ದಿ ಜೀವಿಗಳು 
ಪತ್ರಕರ್ತರು, ತಹಶೀಲ್ದಾರರು. ವೈದ್ಯರು, ವಕೀಲರು 
ಪ್ರೇಮಿಗಳು ಅಮಾವಾಸ್ಯೆಯಂದೇ ಶರಣೆಂದಿದ್ದಾರೆ. 

ಇಲ್ಲಿ ಕಲೆ ಇದೆ. ಸಂಗೀತ ಇದೆ. ಸಾಹಿತ್ಯ ಇದೆ. 
ಸಾಂಸ್ಕೃತಿಕ ಹಿರಿಮೆ ಇದೆ. ವೈಚಾರಿಕತೆ ಇದೆ. 
ಮಠದೊಳಗಿನ ಮಣ್ಣಿನಲ್ಲಿ ಶರಣರ ಆದರ್ಶಗಳಿವೆ. 
ಸಾಲು ಸಾಲು ಅಮೃತದ ನುಡಿಗಳಿವೆ. 
ಇದು ಕೇಲವ ಮಠವಲ್ಲ ಕಾಣೋ ಮಹಾಮನೆ ಮಹಾಮನೆ. 
ಚಿತ್ರದುರ್ಗದ ಮುರುಘೇಶನ ಅರಮನೆ. ಭಕ್ತರ ಪಾಲಿನ ಭಕ್ತಿ ಮನೆ 

- ಮಾಲತೇಶ್ ಅರಸ್  ಹರ್ತಿಕೋಟೆ

No comments:

Post a Comment