Sunday, November 10, 2013

ವೀರಗಾಸೆ ಕುರುಬರ ಆರಾಧನಾ ಕಲೆ

Prajavani paper - ಜಾತಿ ಸಂವಾದ 

ಯೋಗೀಶ್,ಬೆಂಗಳೂರು
ವೀರಗಾಸೆ ಕುಣಿತ ಲಿಂಗಾಯಿತರ ಜಾನಪದ ಕಲಾ ಪ್ರಕಾರವಲ್ಲ ಅದು ಕುರುಬರ  ಜಾನಪದ ಸಂಪ್ರದಾಯ ಹಾಗೂ ಕಲಾ ಪ್ರಕಾರಹಿಂದೆ ಈ ವೀರಗಾಸೆ ಕುಣಿತ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿತ್ತು ಇಂದಿಗೂ ಹಳೇ ಮೈಸೂರು ಪ್ರಾಂತದ ಮದ್ದೂರು  ಮಳವಳ್ಳಿ ಮೈಸೂರು ಕೆಲವು ತಾಲ್ಲೂಕು  ಕೆಲವು ಹಳ್ಳಿಗಳಲ್ಲಿ ಈ ವೀರಗಾಸೆಯ  ಪ್ರಕಾರ ಕಾಣಬಹುದು.
ಕುರುಬರ ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರು ಲಿಂಗ ಕಟ್ಟಿಕೊಂಡು ಹಬ್ಬ ಹರಿದಿನಗಳಲ್ಲಿ, ಹರಿ ಸೇವೆಗಳಲ್ಲಿ ಈ ಕಾರ್ಯವನ್ನು ಕೈಗೊಳ್ಳುತ್ತಾರೆ. ಈ ದಿನಗಳಲ್ಲಿ  ಈ ಅರ್ಚಕರು ಎದೆಗೆ ವೀರಭದ್ರನ ಉಬ್ಬು ಕೆತ್ತನೆಯ ಚಿನ್ನ ಹಾಗೂ ಬೆಳ್ಳಿಯ ವಿಗ್ರಹದ ಹಲಗೆಗಳನ್ನು ಕಟ್ಟಿಕೊಂಡು ತಮಟೆ/ ಹಲಗೆಯ ಹಾಗೂ ನಗಾರಿಯ ನಾದಕ್ಕೆ ಹೆಜ್ಜೆ ಹಾಕುತ್ತಾರೆಅವರ ಸುತ್ತಲು ವೀರಗಾಸೆಯನ್ನು ಕಟ್ಟಿಕೊಂಡ ಕುರುಬ ಜನಾಂಗದವರು ತಮಟೆ, ಹಲಗೆ ಅಥವಾ ನಗಾರಿಯ ಲಯಕ್ಕೆ ಹೆಜ್ಜೆ ಹಾಕುತ್ತಾರೆ.ಎದೆಯ ಮೇಲೆ ಕಟ್ಟಿಕೊಂಡಿರುವ ವೀರಭದ್ರನ ಹಲಗೆ ಹಾಗೂ ತಮಟೆಯ ಸದ್ದಿಗೆ ಆವೇಶಿತನಾಗುವ ಅರ್ಚಕನನ್ನು  ಶಾಂತವಾಗಿಸಲು  ವೀರಭದ್ರನನ್ನು ಹೊಗಳುವ ದಕ್ಷಯಜ್ಞದ ಕೆಲವು ಪ್ರಸಂಗಗಳ ಒಡಪುಗಳನ್ನು/ಕಟಿಗೆಗಳನ್ನು ಹೇಳಿ ಶಿವಸ್ವರೂಪಿಯಾದ ಶಿವನ ಅಂಶವಾದ ವೀರಭದ್ರನನ್ನು ಸೌಮ್ಯವಾಗಿಸುತ್ತಾರೆ. ನಂತರ 88 ಕುಲದ ಒಡಪುಗಳ ಕೆಲವು ಸನ್ನಿವೇಶಗಳನ್ನು ವೀರಗಾಸೆ ಕಟ್ಟಿದ ವೀರಮಕ್ಕಳು ಹೇಳುತ್ತಾರೆ. ಇದು ವೀರಗಾಸೆ ಕುಣಿತ ಅಥವಾ ವೀರಮಕ್ಕಳ ಕುಣಿತ  ಇದು ಈ  ಕಲೆಯ ಪದ್ಧತಿ.  ವೀರಶೈವರ ವೀರಗಾಸೆ ಕುಣಿತ ಇದೇ ಪ್ರಕಾರದ ನೂತನ ಅವಿಷ್ಕಾರ. ಇಲ್ಲಿ ವೀರಭದ್ರನ ಪಾತ್ರಧಾರಿಯೇ ಒಡಪುಗಳನ್ನು ಹೇಳಿ ತನ್ನನ್ನು ತಾನು ಸ್ತುತಿಸಿಕೊಳ್ಳುವಂತೆ ಇರುತ್ತದೆ. ಇಂದಿಗೂ ಕುರುಬರು ಇದನ್ನು ಜಾನಪದ ಕಲೆ ಎಂಬುದಾಗಿ ಒಪ್ಪಿಕೊಳ್ಳುವುದಿಲ್ಲಇದು ದೈವಾಚರಣೆ. ಇದನ್ನು ಹಬ್ಬ ಹರಿ ದಿನಗಳಲ್ಲಿ  ಹರಕೆ ದಿನಗಳಲ್ಲಿ, ಗೃಹ ಪ್ರವೇಶ ಮುಂತಾದ ಸಂದರ್ಭಗಳಲ್ಲಿ ಮಾತ್ರ ಕೈಗೊಳ್ಳಲಾಗುತ್ತದೆ.ಕುರುಬರ  ದೇವಾಲಯಗಳ ಪೂಜಾರಿಗಳನ್ನು ಇಂದಿಗೂ ದೈವಸ್ವರೂಪಿಗಳೆಂದು  ಕುರುಬರು ಆರಾಧಿಸುತ್ತಾರೆ  ಅವರಿಗೆ ಮಾತ್ರವೇ ಲಿಂಗಧಾರಣೆಯಾಗಿದ್ದು ಅವರು ಮಾತ್ರ ಆ ವೀರಭದ್ರನ ಹಲಗೆಯನ್ನು ಮುಟ್ಟುವ ಕಟ್ಟಿಕೊಳ್ಳುವ  ಹಕ್ಕು ಇರುತ್ತದೆ.ಅವರು ಕೆಲವು ಕಟ್ಟಳೆಗಳನ್ನು ಪಾಲಿಸುತ್ತಾರೆ. ಚಪ್ಪಲಿ ಧರಿಸುವಂತಿಲ್ಲ  ಮಾಂಸ ಸೇವನೆ, ದುರ್ವ್ಯಸನಗಳಿಂದ ಮುಕ್ತರಾಗಿದ್ದು ದಿನಕ್ಕೆ ಮೂರು ಬಾರಿ  ಇಷ್ಟ ಲಿಂಗ ಪೂಜೆ ಕೈಗೊಳ್ಳುತ್ತಾರೆ. ಆದರೆ ಇಂತಹ ಆಚರಣೆ ವೀರಶೈವ ಧರ್ಮದಲ್ಲಿ ಕಾಣಬರುವುದಿಲ್ಲ.ಇಂದು ಈ ಕಲಾ ಪ್ರಕಾರ ಬೀದಿಗಳಲ್ಲಿರಸ್ತೆಗಳಲ್ಲಿ, ವೇದಿಕೆಗಳಲ್ಲಿ ಹೊಟ್ಟೆ ಪಾಡಿಗಾಗಿ ಪ್ರದರ್ಶಿಸುವ ಕಲೆಯಾಗಿ ಮಾರ್ಪಾಟಾಗಿರುವುದು  ದುರ್ದೈವದ ಸಂಗತಿ. ಅದು ಅಲ್ಲದೆ ಇದನ್ನು ಹೆಣ್ಣು ಮಕ್ಕಳು ಪ್ರದರ್ಶಿಸುವ ಹಂತಕ್ಕೆ ಹೋಗಿರುವುದು ಹಾಸ್ಯಾಸ್ಪದ.ಗಂಡು ಕಲೆಯಂದೇ ಬಿಂಬಿತವಾಗಿರುವ  ಕುರುಬರ  ಗುರುತೆಂಬಂತಿರುವ ಡೊಳ್ಳು ಕುಣಿತವನ್ನು ಹೆಣ್ಣು ಮಕ್ಕಳು ಕಲಿತು ಪ್ರದರ್ಶಿಸುವುದು  ದುರಂತ. ಶ್ರದ್ಧೆಯುಳ್ಳವರು ಇಂದಿಗೂ ಡೊಳ್ಳನ್ನು ಪೂಜಿಸಿಯೇ ಕೈಗೆತ್ತಿಕೊಳ್ಳುತ್ತಾರೆಈಗ ಹೊಟ್ಟೆ ಪಾಡಿಗಾಗಿ ಕಲೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಇಂದು  ರಾಜಕೀಯ  ಸಭೆಗಳಲ್ಲಿ ಡೊಳ್ಳು ಕಲಾವಿದರು ಮದ್ಯ ಮಾಂಸ ಸೇವಿಸಿ ಈ ಕಲೆ ಪ್ರದರ್ಶಿಸಿ  ಕುರುಬರ ದೇವರ ಆರಾಧನೆಗೆ ಮೈಲಿಗೆಯುಂಟು ಮಾಡಿದ್ದಾರೆ. ಈ ಕಲೆಗಳನ್ನು ಬೀದಿಗೆ ತರುವುದು ಬೇಡ.

  • See more at: http://jathisamvada.prajavani.net/field-collection/field-responses/76#sthash.cZwh8gv6.dpuf

No comments:

Post a Comment